Sunday, July 29, 2012

Shri Krishnana Nooraru Geethegalu - 259

ಬಾರೊ ಬೇಗನೆ ಬೃಂದಾವನಕೆ

ಬಾರೊ ಬೇಗನೆ ಬೃಂದಾವನಕೆ ಚೆಲುವ ಮೇಘಶ್ಯಾಮ
ಉಲಿದು ಮುರಳಿಯ ಅರಳಿಸಿನ್ನು ರಾಧೆಯೆದೆಯೊಳು ಪ್ರೇಮ

ರಾಧೆ ಕಂಗಳು ಖಾಲಿ ಪ್ರಣತಿಯೊ ನೀನೆ ಜೀವದ ಕಾಂತಿಯೊ
ಬಿಸಿಲು ಹೂಮಳೆ ನಡುವೆ ನಗುವ ಬಣ್ಣಬಿಲ್ಲಿನ ರೀತಿಯೊ
ಗರಿಗೆದರಿಸಿ ಬಯಕೆ ನವಿಲನು ಅವಳ ಒಡಲೊಳು ಕೃಷ್ಣನೆ
ತರವೆ ಹೀಗೆ ಬಾರದಿರುವುದು ಕಳೆಯೆ ರಾಧೆಯ ವೇದನೆ (೧)

ದೇಹವವಳೊ ಪ್ರಾಣ ನೀನೊ ಅವಳೊಲಮೆಯ ತಾಣವೊ
ನೀನೇ ಇರದ ವೃಂದಾವನದೊಳು ರಾಧೆಗೆಲ್ಲಿಯ ಪ್ರೇಮವೊ
ತೂಗುಮಂಚದಿ ನಲಿವ ವೀಣೆಯ ನಾದಯಮುನೆಯು ಮೌನವು
ಶ್ರೀನಿವಾಸ ವಿಠಲ ನೀನಿರೆ ರಾಧೆ ಪ್ರೇಮದ ಯಾನವು (೨)

ಬಾರೊ ಬೇಗನೆ ಬೃಂದಾವನಕೆ ಚೆಲುವ ಮೇಘಶ್ಯಾಮ
ಉಲಿದು ಮುರಳಿಯ ಅರಳಿಸಿನ್ನು ರಾಧೆಯೆದೆಯೊಳು ಪ್ರೇಮ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೭.೨೦೧೨

No comments:

Post a Comment