Sunday, April 3, 2011

Shri Krishnana Nooraru Geethegalu - 070

ಕರುಣಿ ಮಾಧವ

ಪಾಲಿಸೆಂದು ಪಾದವನು ಪಿಡಿಯೆ ಕೇಶವನೆ
ಕಾಯದಿರುವೆಯ ನೀನು ಕರುಣಿ ಮಾಧವನೆ

ಕೃತವಾಯ್ತು ತ್ರೇತೆಯು ತ್ರೇತೆ ದ್ವಾಪರವು
ದ್ವಾಪರದ ಸಂಜೆಯಲಿ ಕಲಿಯ ಉದಯ
ಅಂದಿನಿಂದೀ ಕ್ಷಣಕು ಹಲವು ಜನುಮವನೊಕ್ಕು
ನಂಬಿ ಬಂದೆನೊ ಹರಿಯೆ ನಿನ್ನ ಚರಣ (೧)

ಜಗದ ವ್ಯಾಪಾರವದ ಹಲವು ಅವತಾರದೊಲು
ತೂಕದಲಿ ಸಮವಿರಿಸಿ ಕಾಯುತಿರುವೆ
ಅಣುರೇಣು ಜೀವರಿಗೆ ಅರೆಗಳಿಗೆ ಬಿಡುವಿರದೆ
ಹನಿ-ಅನ್ನವನ್ನಿಟ್ಟು ಸಲಹುತಿರುವೆ (೨)

ಕೃತದೊಳಗೆ ಮೀನಾದೆ ತ್ರೇತೆಯೊಲು ರಾಮಯ್ಯ
ಗೋಕುಲದಿ ಗೋಪಾಲ ಕಾಯ್ವೆನೆಂದೆ
ಬೇಡುವೆನೊ ಕಲಿಯೊಳಗೆ ಕೊನೆಯ ಕ್ಷಣವಿರುವನಕ
ಕಾಯೋ ನೀ ಶ್ರೀನಿವಾಸ ವಿಠಲ ತಂದೆ (೩)

ಪಾಲಿಸೆಂದು ಪಾದವನು ಪಿಡಿಯೆ ಕೇಶವನೆ
ಕಾಯದಿರುವೆಯ ನೀನು ಕರುಣಿ ಮಾಧವನೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೪.೨೦೧೧

No comments:

Post a Comment