Sunday, April 10, 2011

Shri Krishnana Nooraru Geethegalu - 075

ಕನಕಗೊಲಿದನೆ ಕೃಷ್ಣ

ಕನಕಗೊಲಿದನೆ ಕೃಷ್ಣ ಆಲಿಸೆನ್ನೆಯ ಮೊರೆಯ
ಪಾಮರರ ಪಾಲಿಪನೆ ವಾಸುದೇವ

ಆವುದಾದಿಯೊ ಅರಿಯೆ ಅಂತ್ಯವೆಲ್ಲಿಯೊ ಅರಿಯೆ
ಬಲ್ಲಿದನೆ ನಡುವೆ ನೀ ನಡೆಸಬೇಕೊ
ಕಾಯ ನಿನ್ನದು ಹರಿಯೆ ಮೋಹವೆಂದರೂ ಹರಿಯೆ
ಹೃದಯ ಸತ್ಯದಿ ನೀ ನುಡಿಸಬೇಕೊ (೧)

ಆದಿಬ್ರಹ್ಮನೆ ಹರಿಯೆ ಆವ ಶಾಸ್ತ್ರವನರಿಯೆ
ನಿನ್ನುದುರದೊಳಗೆನ್ನ ಕಾಯಬೇಕೊ
ಕುಲಗೋತ್ರ ಸೂತ್ರವದ ಅರಿಯೆ ಗೋಕುಲನೆ
ಮಾನಜನರೊಳಗೆನ್ನ ಸಲಹಬೇಕೊ (೨)

ನಿನ್ನ ಸೃಷ್ಠಿಯೊ ಹರಿಯೆ ನಿನ್ನ ಬಿಟ್ಟಿರಲರಿಯೆ
ಶ್ರೀಪಾದ ಸನಿಹದ ಕರುಣೆ ಬೇಕೊ
ಶ್ರೀನಿವಾಸ ವಿಠಲನೆ ಕಿಂಡುಡುಪಿ ಕೃಷ್ಣಯ್ಯ
ನಿನ್ನ ರಕ್ಷೆಯು ನಿರತವೆನಗೆ ಬೇಕೊ (೩)

ಕನಕಗೊಲಿದನೆ ಕೃಷ್ಣ ಆಲಿಸೆನ್ನೆಯ ಮೊರೆಯ
ಪಾಮರರ ಪಾಲಿಪನೆ ವಾಸುದೇವ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೪.೨೦೧೧

No comments:

Post a Comment