Monday, April 11, 2011

Shri Krishnana Nooraru Geethegalu - 076

ನಂಬಿ ಭಜಿಸಿರೊ

ನಂಬಿ ಭಜಿಸಿರೊ ಇವನ ನೆಚ್ಚಿ ಭಜಿಸಿರೊ ಇವನ
ತ್ರೇತೆಯಿಂ ಕಲಿವರೆಗು ಧರೆ ಕಾಯ್ದ ಶ್ರೀಧರನ

ರಾಮ ರಾಮಯೆನಲು ಎದೆಯೊಕ್ಕು ಕೂತವನ
ಬಕುತಿಯಿಂ ಬಾ ಎನಲು ಶಬರಿಗೊಲಿದವನ
ಶಿಲೆಯಾದಹಲ್ಯೆಯ ಶಾಪ ಪರಿಹಾರಕನ
ಕೌಸಲ್ಯೆ ಕಂದನ ಪಿತವಾಕ್ಯ ಪಾಲಕನ (೧)

ಹರಿ ನೀನೆ ಗತಿಯೆನಲು ಕರಿಯ ಕಾಯ್ದವನ
ನಾರಾಯಣನೆನಲು ನರಸಿಂಹನಾದವನ
ಅಬಲೆಯಾರ್ತದ ಮೊರೆಗೆ ವಸ್ತ್ರದಕ್ಷಯನ
ಯಶೋದೆ ಕಂದ ಶ್ರೀ ದ್ವಾರಕಾನಂದನ (೨)

ಸಲಹೊ ಶ್ರೀನಿಧಿಯೆನಲು ಬಿಡದೆ ಬೆನ್ನಾದನ
ವೈಕುಂಠಪತಿಯೆಮ್ಮ ಶ್ರೀನಿವಾಸ ವಿಠಲ
ಕರುಣಿಪನೊ ಭಜಿಪರಿಗೆ ಸುಕೃತವು ಸನ್ಮಾನ
ಕಳೆದಲವು ಜನುಮದ ಅಕ್ಷಮ್ಯದಪಮಾನ (೩)

ನಂಬಿ ಭಜಿಸಿರೊ ಇವನ ನೆಚ್ಚಿ ಭಜಿಸಿರೊ ಇವನ
ತ್ರೇತೆಯಿಂ ಕಲಿವರೆಗು ಧರೆ ಕಾಯ್ದ ಶ್ರೀಧರನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೪.೨೦೧೧

No comments:

Post a Comment