Wednesday, April 13, 2011

Shri Krishnana Nooraru Geethegalu - 078


ನಮೊ ವೇಂಕಟೇಶಾಯ


ನಮೊ ವೇಂಕಟೇಶಾಯ ಶೇಷಾದ್ರಿ ನಿಲಯ
ವಾಸುದೇವಾಯ ಅನಂತಚರಣ

ನಮೊ ನಿರಂಜನಾಯ ನೀಲಾದ್ರಿ ನಿಲಯ
ಶ್ರೀನಿವಾಸಾಯ ನಾರಾಯಣ

ನಮೊ ಭವಹರಾಯ ಭದ್ರಾಚಲ ನಿಲಯ
ಪದ್ಮನಾಭಾಯ ಪರಿಪೂರ್ಣ

ನಮೊ ಸರ್ವೇಶಾಯ ಸಿಂಹಾಚಲ ನಿಲಯ
ರಾಮಚಂದ್ರಾಯ ದಯಾಕರುಣ

ನಮೊ ತ್ರಿವಿಕ್ರಮಾಯ ತ್ರಿಪುರಾಚಲ ನಿಲಯ
ಪರಶುರಾಮಾಯ ಪಾಪಹರಣ

ನಮೊ ವಿಶ್ವಾತ್ಮಾಯ ವೃಷಭಾಚಲ ನಿಲಯ
ದಾಮೋದರಾಯ ಧರ್ಮಗುಣ

ನಮೊ ಸನಾತನಾಯ ಶ್ರೀಶೈಲಾಚಲ ನಿಲಯ
ಹೃಷಿಕೇಶಾಯ ಸಿರಿರಮಣ

ನಮೊ ಕಮಲನಾಥಾಯ ಕ್ಷೀರಾಬ್ಧಿ ನಿಲಯ
ವರಪ್ರದಾಯ ಸುಜನಪ್ರಾಣ

ನಮೊ ಗೋವಿಂದಾಯ ಗೋಕುಲ ನಿಲಯ
ಗೋಪನಂದಾಯ ಮನಮೋಹನ

ನಮೊ ವಿಷ್ಣುದೇವಾಯ ವೈಕುಂಠ ನಿಲಯ
ದಶರೂಪಾಯ ಗೋವರ್ಧನ

ನಮೊ ವಿಶ್ವರೂಪಾಯ ವರಾಹಚಲ ನಿಲಯ
ಶ್ರೀನಿವಾಸ ವಿಠಲಾಯ ಜನಾರ್ಧನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೦೪.೨೦೧೧

No comments:

Post a Comment