Sunday, April 3, 2011

Shri Krishnana Nooraru Geethegalu - 071


ನಾದ ಯಮುನೆ


ನುಡಿಸು ಮುರಳಿಯನು ವನಮಾಲಿ
ಬರಲಿ ಒಲುಮೆಯ ರಾಗ ಎದೆಗೆ ತೇಲಿ
ಸರ್ವಗಂಧನ ಪರುಷ ಸುಗುಣವದು ಸೇರಿ
ಗೋಕುಲದ ಹಾದಿಯಲಿ ನಲಿದು ತಂಗಾಳಿ

ಬುವಿಯು ಬಸುರಾಗಿ ಬೀಜದೊಳ ಕಣ್ಣರಳಿ
ಹಸಿರು ಜೀವದ ಉಸಿರು ನೀನು ಹರಿಯೆ
ಹಸಿರಿನೊಳಗಿನ ಮೊಗ್ಗು ನಾನೊಂದು ಹೂವಾಗಿ
ನಿನ್ನ ಶ್ರೀಪಾದದೊಳು ಇರುವೆ ದೊರೆಯೆ (೧)

ಎದೆಯಿಂದಲೆದೆಗೆ ಕೃತದಿಂದ ಕಲಿಯೆಡೆಗೆ
ಸತತ ನಾದದ ಯಮುನೆ ಹರಿಯುತಿರಲಿ
ನಿಲಿಸದಿರೊ ಮುರಳಿಯನು ಶ್ರೀನಿವಾಸ ವಿಠಲನೆ
ಸಲಹೊ ಪ್ರೀತಿಯ ಒರತೆ ಬತ್ತದಿರಲಿ (೨)

ನುಡಿಸು ಮುರಳಿಯನು ವನಮಾಲಿ
ಬರಲಿ ಒಲುಮೆಯ ರಾಗ ಎದೆಗೆ ತೇಲಿ
ಸರ್ವಗಂಧನ ಪರುಷ ಸುಗುಣವದು ಸೇರಿ
ಗೋಕುಲದ ಹಾದಿಯಲಿ ನಲಿದು ತಂಗಾಳಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೪.೨೦೧೧


No comments:

Post a Comment