Tuesday, September 25, 2012

Shri Krishna Nooraru Geethegalu - 297

ಕಂಡು ಧನ್ಯನಾದೆ

ಕಂಡು ಧನ್ಯನಾದೆ ನಾ ಕಾವೇರಿ ರಂಗನ
ಸ್ಮರಿಸೆ ಸುಖದಿ ಎಮ್ಮ ಕಾವ ಬಕುತಸಂಗನ

ಅಮ್ಮ ಲಕುಮಿಯ ಪ್ರಾಣದೊಡೆಯನ ವೇಂಕಟೇಶನ
ಪರಮ ಪಾವನೆ ಪುಣ್ಯೆಯವಳು ಪಾದ ತೊಳೆವನ
ಆದಿಶೇಷನ ಶಾಂತಶಯನದಿ ಸುಖಿಪ ಶ್ರೀನಿವಾಸನ
ಧರಣಿ ಕಾವ ದಶದ ದೇವನ ದುರಿತ ಭಂಗನ (೧)

ಆದಿರಂಗನ ಭಜಿಸೆ ಶುದ್ಧದಿ ಅಂತರಂಗದಿ ನಲಿವನ
ನಾನು ತೊರೆದು ನೀನೆ ಎನುವನ ಕರೆಗೆ ತಾನೊಲಿವನ
ಜಗದ ದಾಸರು ಹಾಡಿ ಪೊಗಳಿದ ಆದಿ ಅನಂತ ಅಂತ್ಯನ
ದೀನನೆನ್ನನು ಮಾನದಿ ಕಾಯ್ವ ಶ್ರೀನಿವಾಸ ವಿಠಲ

ಕಂಡು ಧನ್ಯನಾದೆ ನಾ ಕಾವೇರಿ ರಂಗನ
ಸ್ಮರಿಸೆ ಸುಖದಿ ಎಮ್ಮ ಕಾವ ಬಕುತಸಂಗನ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೦೯.೨೦೧೨

No comments:

Post a Comment