Saturday, September 1, 2012

Shri Krishnana Nooraru Geethegalu - 281

ಕಾಡ ಬಿದಿರಿನ ಕೊರಡೊ

ಕಾಡ ಬಿದಿರಿನ ಕೊರಡೊ ಕಾದಿಹೆ ನಾನವನ
ಈ ಜೀವ ಜೀವನ ಪಾವನನ

ಶಬರಿಯ ಮೊರೆಗೆ ತಾನೊಲಿದವನ
ಶಿಲೆಯೊಳು ಜೀವವ ತುಂಬಿದನ
ಕೇಸರಿಸುತನವನು ನಿನ್ನ ಚರಣವೊ ಎನಲು
ಬಕುತನ ಎದೆಯೊಳು ನಿಂದವನ (೧)

ಗೋಕುಲ ಪುರಜನ ಪೂಜಿಪ ದೇವನ
ರಾಧೆಯು ಹೃದಯದಿ ಪ್ರೇಮಿಪನ
ಜಗದ ಗೋಗಳ ಕಾವ ಶ್ರೀನಿವಾಸನ ವಿಠಲ
ಕೊಳಲಾಗಿಸಿ ಎನ್ನ ನುಡಿಸುವನ (೨)

ಕಾಡ ಬಿದಿರಿನ ಕೊರಡೊ ಕಾದಿಹೆ ನಾನವನ
ಈ ಜೀವ ಜೀವನ ಪಾವನನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೯.೨೦೧೨

No comments:

Post a Comment