Wednesday, September 5, 2012

Shri Krishnana Nooraru Geethegalu - 282

ನಿನ್ನ ಸಿರಿಚರಣವನು

ನಿನ್ನ ಸಿರಿಚರಣವನು ಭಜಿಪ ಶ್ರೀದಾಸರ
ದಯೆಯು ಎನಗಿರಲು ನೀನ್ಯಾತಕೊ

ಅರಿಯದೆ ಹರಿಯೆಂದ ಅಜಮಿಳಗೆ ನಮಿಸುವೆನೊ
ನೀನೆ ಗತಿಯೆಂದ ಪ್ರಹ್ಲಾದಗೆ
ಶ್ರೀಹರಿಯೆ ಕಾಯೆಂದ ಕರಿಗೆ ವಂದಿಪೆ ಕೃಷ್ಣ
ನೀನೆನ್ನ ಬಲವೆಂದ ಆ ಭೀಮಗೆ (೧)

ಮೂಢಮತಿ ನಾನಯ್ಯ ದೂರದಕ್ಷರವರಿಯೆ
ಕೃತ ತ್ರೇತೆ ಜಪತಪವ ಕೇಳೊ ದೇವ
ನಿನ್ನುಂಡ ಬಕುತರ ಬಾಗಿಲೊಳು ನಾನಿರುವೆ
ಕಾದಿಹೆನು ಶ್ರೀನಿವಾಸ ವಿಠಲ ಬರುವ (೨)

ನಿನ್ನ ಸಿರಿಚರಣವನು ಭಜಿಪ ಶ್ರೀದಾಸರ
ದಯೆಯು ಎನಗಿರಲು ನೀನ್ಯಾತಕೊ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೫.೦೯.೨೦೧೨

No comments:

Post a Comment