Sunday, September 9, 2012

Shri Krishnana Nooraru Geethegalu - 285

ಬರುವೆ ನಿನ್ನ ಸನಿಹ

ಬೇಸರವು ಏಕೆ ರಾಧೆ ಬರುವೆ ನಿನ್ನ ಸನಿಹ
ಒಲುಮೆ ಹನಿಹನಿ ವರ್ಷಗರೆದು ಕಳೆವೆ ನಿನ್ನ ವಿರಹ

ನಿನ್ನ ವೇದನೆ ಎನಗೆ ಅರಿಯದೇ ನೀನೆ ಎನ್ನ ಪ್ರಾಣವು
ನಿನ್ನ ನಿರ್ಮಲಪ್ರೇಮ ತೊರೆದು ಬದುಕಲುಂಟೆ ತ್ರಾಣವು (೧)

ಸುರಿವ ಸೋನೆಮಳೆಯು ತಾನು ನಿನ್ನ ನೆನಪನೆ ತರುತಿದೆ
ಎನ್ನ ಎದೆಯ ವೇಣು ನಿನ್ನ ವೀಣೆ ಸನಿಹವ ಬಯಸಿದೆ (೨)

ನಿನ್ನ ಕಂಗಳ ಬೆಳಕೆ ಸಾಕು ಪ್ರಣತಿ ಸಾಲು ಏತಕೆ
ಚಂದ್ರ ತಾರೆ ತೂಗುಮಂಚವು ಸಾಕ್ಷಿ ಎಮ್ಮ ಮಿಲನಕೆ (೩)

ದಾಹವೆನುತಿದೆ ಎನ್ನ ಮೈಮನ ರಾಧೆ ನಿನ್ನ ಸೇರಲು
ಶ್ರೀನಿವಾಸ ವಿಠಲ ಬರುವೆನೆ ಸಿಹಿಯಧರವ ಹೀರಲು (೪)

ಬೇಸರವು ಏಕೆ ರಾಧೆ ಬರುವೆ ನಿನ್ನ ಸನಿಹ
ಒಲುಮೆ ಹನಿಹನಿ ವರ್ಷಗರೆದು ಕಳೆವೆ ನಿನ್ನ ವಿರಹ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೯.೨೦೧೨

No comments:

Post a Comment