Monday, September 10, 2012

Shri Krishnana Nooraru Geethegalu - 286

ಸನಿಹ ದೂರ ಎನುವುದೇಕೆ

ಸನಿಹ ದೂರ ಎನುವುದೇಕೆ ಎನ್ನವಳು ನೀ ಎಂದ ಮೇಲೆ
ಎದೆಗೆಯೆದೆಯು ಬೆರೆಯೆ ಜೇನು ಸವಿಯೆ ಸಿಹಿ ತಡವೇಕೆ

ನಿನ್ನ ಕಂಗಳ ಕಾಂತಿ ಸಾಕು ಹೊಳೆವ ತಾರೆಯ ಹಂಗೇಕೆ
ಸೋಮಸುಧೆಯು ವ್ಯರ್ಥ ಗೆಳತಿ ನಿನ್ನ ಅಧರವು ಅರಳಿರೆ

ನಿನ್ನ ಮೌನವೆ ಕವಿತೆ ಬರೆದೊಡೆ ಮಾತಿಗೆಲ್ಲಿಯ ಅರ್ಥವೇ
ಮಾತನಾಡಲು ಅರಳಿ ಮಲ್ಲಿಗೆ ಒಲುಮೆಯ ಹೊಸ ಸೂತ್ರವೆ

ಸನಿಹವಿರದಿರೆ ರಾಧೆ ನೀನು ಎನ್ನ ಜೀವಕ್ಕೆಲ್ಲಿಯ ಸಾರವೆ
ಶ್ರೀನಿವಾಸ ವಿಠಲ ನಿನ್ನವ ನೀನೆನ್ನ ಒಲುಮೆ ಆಧಾರವೆ

ಸನಿಹ ದೂರ ಎನುವುದೇಕೆ ಎನ್ನವಳು ನೀ ಎಂದ ಮೇಲೆ
ಎದೆಗೆಯೆದೆಯು ಬೆರೆಯೆ ಜೇನು ಸವಿಯೆ ಸಿಹಿ ತಡವೇಕೆ

                     ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೯.೨೦೧೨

No comments:

Post a Comment