Saturday, September 15, 2012

Shri Krishnana Nooraru Geethegalu - 291

ವಂದೆ ಗಣನಾಥ

ಗಣನಾಥ ವಂದೆ ಗಣನಾಥ
ವರದ ವಿನಾಯಕ ಗುಣದಾತ

ಕೈಲಾಸಪತಿಯೆಮ್ಮ ಶಿವರಾಯಸುತನೆ
ಮಾತೆಯ ಮೈಯ್ಯ ಉದಕದೊಳುದಿಸಿದನೆ
ಜನುಮ ಕಾರಣರೆ ಜಗವೆನಗೆಂದವನೆ
ಸ್ಕಂದಾಪೂರ್ವಜ ಸುಮುಖ ಶ್ರೀ ದೇವನೆ (೧)

ದೇವದೇವಾದಿಗಳ ದುರಿತವ ಕಳೆದನೆ
ಆದಿಪೂಜೆಯು ನಿನಗೆ ವರವದ ಪಡೆದನೆ
ಕರುಣದಿ ಕಾಯೆಮ್ಮ ಕಪಿಲ ಕವೀಶನೆ
ಶ್ರೀನಿವಾಸ ವಿಠಲ ತಾ ಒಪ್ಪಿ ವಂದಿಪನೆ (೨)

ಗಣನಾಥ ವಂದೆ ಗಣನಾಥ
ವರದ ವಿನಾಯಕ ಗುಣದಾತ

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೯.೨೦೧೨

No comments:

Post a Comment