Tuesday, September 18, 2012

Shri Krishnana Nooraru Geethegalu - 295

ಸ್ನೇಹಿತರೆ, ಗಣೇಶ ಚತುರ್ಥಿಯ ಶುಭಸಂದರ್ಭದಲ್ಲಿ, ಮಹಾಗಾತ್ರನ ಬಗ್ಗೆ ಒಂದು ಲೈಟ್ ಕವಿತೆ.

ನಮ್ಮ ಗಣಪ

ಡೊಳ್ಳು ಹೊಟ್ಟೆ ಬಿಟ್ಟುಕೊಂಡು
ಅಪ್ಪ ಶಿವಂಗ್ ಟಾಟಾ ಮಾಡಿ
ಬತ್ತಾ ಅವ್ನೆ ಅವ್ವನ್ ಜೊತೆ
ನಮ್ಮ ಗಣಪ

ಬಾಗ್ಲೀಗ್ ಮಾವಿನ್ ತೋರ್ಣ ಕಟ್ಟಿ
ಆಡ್ಗೆ ಮನೇಲ್ ಹೋಳ್ಗೆ ತಟ್ಟಿ
ಉಣ್ಣಾಕ್ ಬಾರೊ ಅವ್ವನ್ಜೊತೆ
ಕರ್ಯಾನ್ ಬರ್ರಪ್ಪ

ಮಳೆಪಳೆ ಕೊಡೋನ್ ನೀನು
ಅಕ್ಕಿಅನ್ನ ನೀಡೋನ್ ನೀನು
ಇನ್ನೊಂದ್ ನಾಕ್ದಿನ ಇದ್ದೋಗಂತ
ಕೇಳಿಕೊಳ್ರಪ್ಪ

ಆಗಾಕಿಲ್ಲ ಬಿಲ್ ಕುಲ್ ಅಂತ
ವಂಟೆ ಬಿಟ್ರೆ ನಂ ಗಣಪ
ದಾರೀಗ್ ಕಡ್ಬೀನ್ ಬುತ್ತಿ ಕಟ್ಟಿ
ಕಳ್ಸಿಕೊಡ್ರಪ್ಪ

ಮುಂದಿನ್ವರ್ಸ ಬರ್ಬೇಕಂತ
ಅಲ್ಲಿವರೆಗು ಕಾಯ್ಬೇಕಂತ
ಸಿವ್ನ ಸುಬ್ನ ಕೇಳುದ್ವೀಂತ
ಹೇಳಿ ಕಳುಸ್ರಪ್ಪ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೯.೨೦೧೨

No comments:

Post a Comment