Friday, September 14, 2012

Shri Krishnana Nooraru Geethegalu - 290

ವಂದಿಪೆ ವರಪ್ರದ

ವಂದಿಪೆ ವರಪ್ರದ ವಿನಾಯಕ
ಚಂದ್ರಕಿರೀಟನೆ ಸುರಗಣವಂದಿತ

ಆನೆ ಅಂದದ ಮೊಗನೆ ಹರಸೆಮ್ಮ ಹೇರಂಬ
ಜಗದೊಳು ಸಕಲವು ನಿನ್ನಿಂದಲಾರಂಭ
ದುರಿತದ ಮೋದಕ ಭಂಜಿಸೊ ಭವಹರ
ಸುಖದೊಳು ಸಲಹೆಮ್ಮ ಶಂಕರಕುವರ (೧)

ಭಾರತ ಬರೆದನೆ ಭವಿತದಿ ಪೊರೆವನೆ
ಅಕ್ಷರದಂಬುಧಿಯೆ ಏಕಾಕ್ಷರನೆ
ದಶದೊಳು ಧರೆಕಾಯ್ವ ಶ್ರೀನಿವಾಸ ವಿಠಲನೆ
ಅದಿಯೊಳು ಪೂಜಿಸುವ ಎಮ್ಮ ರಕ್ಷಕನೆ (೨)

ವಂದಿಪೆ ವರಪ್ರದ ವಿನಾಯಕ
ಚಂದ್ರಕಿರೀಟನೆ ಸುರಗಣವಂದಿತ

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೯.೨೦೧೨

No comments:

Post a Comment