Saturday, August 4, 2012

Shri Krishnana Nooraru Geethegalu - 262

ಭುವನದಿ ಭವ ಅಳಿಸೊ

ಭುವನದಿ ಭವ ಅಳಿಸೊ ಶ್ರೀಕೃಷ್ಣಯ್ಯ
ಜಗದೊಳು ಸುಖವಿರಿಸೊ ಸುಜನಗೆ

ಹಲವನ್ಯ ಎಸಗಿದೀ ಆರರ ದೇಹವು
ಪರುಷವಾಗುವುದೆ ಹರಿಸ್ಪರ್ಶವಿಲ್ಲದೆ
ಚಕ್ರದೀ ಜಗವಿದು ನಿನ್ನ ಸೃಷ್ಟಿಯೊ ದೇವ
ಬದುಕದು ಬದುಕೆನೊ ಚರಣಕೆ ಬಾಗದೆ (೧)

ಜಡಬಂಡೆಯೊ ನಾನು ಚಳಿಮಳೆಯರಿಯದ
ಹೊಡೆದೆನ್ನ ಒಳಗನು ಮೂರುತಿ ಮೂಡಿಸೊ
ಧರಣಿ ಸೂತ್ರಕ ದೇವ ಶ್ರೀನಿವಾಸ ವಿಠಲಯ್ಯ
ನಿನ್ನ ಕೈಯ್ಯೊಳ ಬೊಂಬೆ ಸುಖದೊಳಗಾಡಿಸೊ (೨)

ಭುವನದಿ ಭವ ಅಳಿಸೊ ಶ್ರೀಕೃಷ್ಣಯ್ಯ
ಜಗದೊಳು ಸುಖವಿರಿಸೊ ಸುಜನಗೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೮.೨೦೧೨

No comments:

Post a Comment