Tuesday, August 7, 2012

Shri Krishnana Nooraru Geethegalu - 265

ಬಾರೆ ಎನ್ನ ಸನಿಹಕೆ

ಮೌನ ಧರಿಸಿ ಕೊಲುವೆಯೇಕೆ ಮಾತನಾಡೆ ರಾಧೆ
ಮುನಿಸ ಬಿಡೆ ಮನಸ ಕೊಡೆ ಬಾರೆ ಎನ್ನ ಸನಿಹಕೆ

ಕಾಡಮಲ್ಲಿಗೆ ಮೊಗ್ಗಮಾಲೆಯ ಮುಡಿಗೇರಿಸೆ ತಂದಿಹೆ
ಮುರಳಿಯೆದೆಗೆ ಹೊಸ ಒಲವಿನ ರಾಗ ಬರೆದು ತುಂಬಿಹೆ
ನಿನ್ನ ಚೆಲುವಿನ ಚಿತ್ರಬರೆಯೆ ಹೃದಯದಾಳೆಯ ತೆರೆದಿಹೆ
ಅಧರದಂಚಿಗೆ ಮಧುರ ಕುಂಚವ ತಾರೆ ನಾನು ಕಾದಿಹೆ (೧)

ಇರುಳ ಬಾನೊಳು ನಗುವ ಚಂದಿರ ನಾಚಿವೋಡಿದ ದೂರಕೆ
ಚುಕ್ಕೆ ತಾರೆ ಪ್ರಣತಿ ಸಾಲು ಕಾದು ಎಮ್ಮ ಮಿಲನಕೆ
ತ್ರೇತೆಯಿಂದ ಪ್ರೀತಿಯೆಮದು ಮರೆತೆಯೇನೆ ಜಾನಕಿ
ಶ್ರೀನಿವಾಸ ವಿಠಲ ನಿನ್ನವ ನಿನ್ನೊಲವೊಳು ನಾ ಸುಖಿ (೨)

ಮೌನ ಧರಿಸಿ ಕೊಲುವೆಯೇಕೆ ಮಾತನಾಡೆ ರಾಧೆ
ಮುನಿಸ ಬಿಡೆ ಮನಸ ಕೊಡೆ ಬಾರೆ ಎನ್ನ ಸನಿಹಕೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೮.೨೦೧೨

No comments:

Post a Comment