Tuesday, August 28, 2012

Shri Krishnana Nooraru Geethegalu - 279

ಅನುಗಾಲ ನಿನ್ನೊಲುಮೆ

ಅನುಗಾಲ ನಿನ್ನೊಲುಮೆ ಎನಗಿರಿಲೊ ಕೃಷ್ಣ
ನಿನ್ನ ಪಾದದ ಧೂಳೊ ಸಲಹೊ ಸುಖದೊಳಗೆನ್ನ

ಅಣುರೇಣು ತೃಣಕಣಕೆ ನೀನಾದಿಯೊ ತಂದೆ
ಅವನಿಯನು ಉದ್ಧರಿಸೆ ದಶದೊಳಗೆ ಬಂದೆ
ಸರಿತಪ್ಪು ನಿನ್ನ ಚಿತ್ತ ನನಗೇನೊ ಗೊತ್ತು
ಅನ್ಯಗಳ ಕರುಣದೊಳು ಮನ್ನಿಸೊ ಕ್ಷಮೆಯಿತ್ತು (೧)

ನೀನಿಲ್ಲದೀ ಜಗದಿ ನಾನು ನಿರ್ಜೀವ
ನೀನೇ ಸಕಲಕು ಕೃಷ್ಣ ಮೂಜಗವ ಕಾವ
ನೀ ಮಾತೆ ನಾ ಕರುವು ಕರೆದೆಡೆಗೆ ಬರುವೆ
ಶ್ರೀನಿವಾಸ ವಿಠಲ ನೀ ಇರಿಸಿದಂದದಿ ಇರುವೆ (೨)

ಅನುಗಾಲ ನಿನ್ನೊಲುಮೆ ಎನಗಿರಿಲೊ ಕೃಷ್ಣ
ನಿನ್ನ ಪಾದದ ಧೂಳೊ ಸಲಹೊ ಸುಖದೊಳಗೆನ್ನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೮.೨೦೧೨

No comments:

Post a Comment