Saturday, May 7, 2011

Shri Krishnana Nooraru Geethegalu - 095

ಗುಣನಿಧಿ ಗೋವಿಂದ

ಮಾಧವ ವೇಣುಗೋಪಾಲ ಪಾಲ
ಶ್ರೀಕರ ಶುಭಕರ ಕರುಣಾಸಾಗರ

ಬೃಂದಾವನ ಸಂಚಾರಿ ಶ್ರೀಹರಿ
ಪ್ರಿಯಸಖಿ ರಾಧಾ ಮನಚೋರಿ
ಗಿರಿಧಾರಿ ಕೃಷ್ಣ ತ್ರಿಜಗವಿಹಾರಿ
ಮದನಮೋಹನ ಗೋಕುಲಶೌರಿ (೧)

ನಾರಾಯಣ ನಮೋ ನಿರಂಜನ
ಪದುಮನಾಭ ಶ್ರೀ ಸನಾತನ
ನರಕುಲಕಾವ ನಿರ್ಗುಣ ಪಾವನ
ಆದಿದೇವ ಶ್ರೀಹರಿ ಚಿರನೂತನ (೨)

ದಯಾನಿಧಿ ಸಿರಿ ಸುಖಾಂಬುಧಿ
ಗುಣನಿಧಿ ಸಹಜ ಶ್ರೀಪಾದಿ
ಶ್ರೀನಿವಾಸ ವಿಠಲನೆ ಜಗದಾದಿ
ಸಕಲವ ಸಲಹೊ ಕರುಣದಿ (೩)

ಮಾಧವ ವೇಣುಗೋಪಾಲ ಪಾಲ
ಶ್ರೀಕರ ಶುಭಕರ ಕರುಣಾಸಾಗರ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೦೫.೨೦೧೧

No comments:

Post a Comment