Sunday, May 15, 2011

Shri Krishnana Nooraru Geethegalu - 104

ಶ್ರೀಪಾದ ನಂಬಿದೆನೊ

ಶ್ರೀಹರಿಯೆ ಜಗದೊರೆಯೆ ನೀನೆನ್ನ ಗತಿಯೆಂದು
ಶ್ರೀಪಾದ ನಂಬಿದೆನೊ ಗೋವಿಂದ ಸಲಹೆನ್ನ

ಅಣುರೇಣುತೃಣಕಾಷ್ಠದಾದಿಮೂಲನೆ ದೇವ
ನಿನ್ನ ಸೃಷ್ಟಿಯೊಳುದಿತ ಅಂಡಾಣು ನರನೆನ್ನ
ಅಂಗದೊಳು ಕುಣಿವಾರು ಪುಂಡರಾ ಹೆಡೆಕಟ್ಟಿ
ಸರಿಯಂಕೆಯೊಳಿಟ್ಟು ಸುಖದಿ ಪೊರೆಯೆಂದು (೧)

ಪಾಪಪುಣ್ಯವ ಕೆಡುವಿ ಮೆರೆಯುವೀ ಕಲಿಯೊಳಗೆ
ಕಾಮ-ಮೋಹಗೆಳೆಂಬೊ ಸಂಸಾರ ಸಂತೆಯೊ
ಸತಿಸುತರು ಸಿರಿಯಾಳೊ ಸ್ವಾರ್ಥ ಸಡಗರದಿ
ಪಾರಮಾರ್ಥವ ಮರೆತೀ ಮೂಢನ ಕ್ಷಮಿಸೆಂದು (೨)

ಭವರೋಗಹರ ನೀನು ನರಹರಿಯು ಧರೆಯೊಳಗೆ
ನಶ್ವರದ ನರಬಾಳ್ವೆ ನರಕ ಸಾಕೊ
ತಿರುಮಲೆಯ ಕಲಿವರದ ಶ್ರೀನಿವಾಸ ವಿಠಲಯ್ಯ
ಸುಖದೊಳಗೆ ನೀನೆನ್ನ ಕಾಯಬೇಕೆಂದು (೩)

ಶ್ರೀಹರಿಯೆ ಜಗದೊರೆಯೆ ನೀನೆನ್ನ ಗತಿಯೆಂದು
ಶ್ರೀಪಾದ ನಂಬಿದೆನೊ ಗೋವಿಂದ ಸಲಹೆನ್ನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೫.೨೦೧೧

No comments:

Post a Comment