Tuesday, May 24, 2011

Shri Krishnana Nooraru Geethegalu - 113

ವೇಂಕಟನೊ ಹರಿ

ವೇಂಕಟನೊ ಹರಿ ವೇಂಕಟನೊ ಕೃಷ್ಣ
ಸುಜನರ ಸಂಕಟ ಕಳೆಯುವ ನಿಜನೆಂಟ

ಮಥುರೆಯ ಸೆರೆಯೊಳು ಪುಟ್ಟಿದನೊ ಹರಿ
ಗೋಕುಲ ಗೊಲ್ಲರನೊಪ್ಪಿದನೊ
ದುರುಳರ ತಲೆ ಕುಟ್ಟಿ ದುರಿತದಯೆದೆ ಮೆಟ್ಟಿ
ಧರಣಿ ಧರ್ಮವ ಕಾಯ್ದ ಗೋವಿಂದನೊ (೧)

ಜಲದಾದಿರೂಪನೊ ಅವತಾರಿ ಶ್ರೀಹರಿ
ದಶರೂಪದಿ ಜಗವ ಕಟ್ಟಿದನೊ
ಶರಣಯ್ಯ ಸಲಹೆನಲು ಕರಿಯು ಕುಚೇಲರು
ಕರುಣೆಯಿಂದಲಿ ಕಾಯ್ದ ಕೃಷ್ಣಯ್ಯನೊ (೨)

ಪರಮಾತ್ಮ ಪೊರೆಯೆನಲು ಭಕ್ತವತ್ಸಲ ಹರಿ
ಧರ್ಮದ ಪಾಂಡವಗೊಲಿದವನೊ
ಮೇಲುಕೋಟೆಯ ಚೆಲುವ ಶ್ರೀನಿವಾಸ ವಿಠಲ
ನೆಚ್ಚಿದ ನರರನು ಸಲಹುವನೊ (೩)

ವೇಂಕಟನೊ ಹರಿ ವೇಂಕಟನೊ ಕೃಷ್ಣ
ಸುಜನರ ಸಂಕಟ ಕಳೆಯುವ ನಿಜನೆಂಟ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೦೫.೨೦೧೧

No comments:

Post a Comment