Monday, May 9, 2011

Shri Krishnana Nooraru Geethegalu - 099

ಭಕ್ತವತ್ಸಲ ಹರಿಯೆ

ಬೇಡಿದರು ಬಾರದಿಹ ಭಕ್ತವತ್ಸಲ ಹರಿಯೆ
ಬಂಧಿಯಾಗಿಹೆ ಬಿಡಿಸೊ ಭವದಾರು ಸೆರೆಯೊಳಗೆ

ಮುನ್ನ ತ್ರೇತೆಯೊಳು ಶ್ರೀರಾಮ ಸಲಹೆನಲು
ವಾನರನ ಎದೆಯೊಕ್ಕು ನಿಂತ ದೇವ
ರಾವಣನ ಶಿರಮುರಿದೆ ಶ್ರೀಹರಿಯೆ ಕಾಯೆನಲು
ಅಹಲ್ಯೆಗೊಲಿದನೆ ರಾಮಜೀವ (೧)

ಅಜಮಿಳನ ಕಾಯ್ದವನೆ ನಾರಾಯಣನೆನಲು
ಅಸುರಕಂದನ ಶ್ರೀಪ್ರಹ್ಲಾದ ದೇವ
ಕೌರವನ ತೊಡೆಮುರಿದೆ ಶ್ರೀಕೃಷ್ಣ ಕಾಯೆನಲು
ಧರ್ಮ ಪಾಂಡವಪಕ್ಷ ದೇವದೇವ (೨)

ಕಾಮ-ಕ್ರೋಧವನಿಳಿಸೊ ಲೋಭ-ಮೋಹವನಳಿಸೊ
ಎನ್ನ ಮದಮತ್ಸರವ ಹೊಡೆದುರುಳಿಸೊ
ಶುದ್ಧಾಂತರಂಗದೊಳು ಶ್ರೀನಿವಾಸ ವಿಠಲಯ್ಯ
ಬೇಡುವೆನೊ ಬಂದಲ್ಲಿ ಸ್ಥಿರದಿ ನೆಲೆಸೊ(೩)

ಬೇಡಿದರು ಬಾರದಿಹ ಭಕ್ತವತ್ಸಲ ಹರಿಯೆ
ಬಂಧಿಯಾಗಿಹೆ ಬಿಡಿಸೊ ಭವದಾರು ಸೆರೆಯೊಳಗೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೫.೨೦೧೧

No comments:

Post a Comment