Thursday, May 19, 2011

Shri Krishnana Nooraru Geethegalu - 106

ಇಷ್ಟದರಸ ಕೃಷ್ಣ

ಅಷ್ಟಮಹಿಷಿಯರೊಡೆಯ ಇಷ್ಟದರಸನೆ ಕೃಷ್ಣ
ಎಮ್ಮನಿಷ್ಟ ಕಷ್ಟಗಳ ಬೆನ್ನಟ್ಟಿ ಹರಸೊ

ಎನ್ನೊಳಾರ್ಭಟಿಸುತಿಹ ಆರರ ಪೂತನೆಯ ಹಾಲ
ಹಲವಳಿದೆನ್ನ ಶುದ್ಧನಾಗಿರಿಸೊ

ಶೌರಿಯೆ ಸುಭದ್ರಾಗ್ರ ಅಭಿಮನ್ಯು ಮಾವಯ್ಯ
ದುರಿತದೆನ್ನೆಯ ವ್ಯೂಹಚಕ್ರವದ ಮುರಿಯೊ

ಎನ್ನ ಮನ ಚಂಚಲಿಪ ಮಾಯಾಷ್ಟವಕ್ರೆಯನು
ಕಲಿವರದ ಶ್ರೀನಿವಾಸ ವಿಠಲನೆ ವರಿಸೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೫.೨೦೧೧

No comments:

Post a Comment