Thursday, May 12, 2011

Shri Krishnana Nooraru Geethegalu - 102

ಶ್ರೀಗುರು ಪಾರ್ಥಸಾರಥಿ ವಿಠಲ

ಗುರುವು ಬಂದ ಎನ್ನ ಅರಿವು ಬಂದ
ಪಾರ್ಥಸಾರಥಿ ವಿಠಲ ದೊರೆಯು ಬಂದ

ಹಿಂದಿನಾ ಜನುಮಗಳ ಕರ್ಮವ ನೀಗಿಸಿ
ಗಾಢಾಂಧ ಮಸುಕಿದೀ ಕಂಗಳ ತೆರೆಯಿಸಿ
ಪಾಳುಕೊತ್ತಲದಂತೀ ದೇಹ ದೇವಳದಿ
ಅರಿವಿನ ಹಣತೆಯ ಬೆಳಗಿಸೊ ದೇವ (೧)

ಜಲರೂಪನುದಯವ ನಿಜದೊಳು ಸ್ಮರಿಸಿ
ಅಮರರಾಮನ ಕಥೆಯ ಎದೆಯೊಳು ನಿಲಿಸಿ
ದ್ವಾಪರದೊಡೆಯ ಶ್ರೀಕೃಷ್ಣನ ನಯವನು
ತಿಳಿಸೆನ್ನ ಭವರೋಗವಳಿಸುವ ದೇವ (೨)

ಇಂದೆನ್ನ ಜನುಮವದು ಸಾರ್ಥಕವೊ ಗುರುವೆ
ನಿನ್ನ ಸೇವೆಯ ಭಾಗ್ಯವೆನಗೆ ನೀಡೋ
ನಿನ್ನ ಶ್ರೀಪಾದದಡಿ ಧೂಳಕಣ ನಾ ಗುರುವೆ
ಶ್ರೀನಿವಾಸ ವಿಠಲ ನೀ ಎನ್ನ ಹರಸೊ (೩)

ಗುರುವು ಬಂದ ಎನ್ನ ಅರಿವು ಬಂದ
ಪಾರ್ಥಸಾರಥಿ ವಿಠಲ ದೊರೆಯು ಬಂದ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೨.೦೫.೨೦೧೧

1 comment:

  1. NK here says - Guruvininda Arivu.

    True 'Guru' opens our inner eyes and helps us understand what we are? what are we here for? what should we be doing?

    Only that True 'Guru' can give clarity that we and everything else in the world revlolves around HIM.

    ReplyDelete