Sunday, May 8, 2011

Shri Krishnana Nooraru Geethegalu - 098

ಮತ್ತೆ ಅವತರಿಸೊ

ಮುದ್ದುವಾಮನನಾಗಿ ಮತ್ತೆ ಅವತರಿಸೊ
ಎನ್ನಹಂ ನೆತ್ತಿಯೊಳು ಶ್ರೀಪಾದವಿರಿಸೊ

ಎನ್ನ ಮೈಯೊಳು ಮೊರೆವ ಕಾಮಕಾಲಿಂದಿಯ
ಕ್ರೋಧದ ಹೆಡೆಮೆಟ್ಟಿ ಥಕಧಿಮಿತ ಕುಣಿಯೊ
ಮೋಹ ವಿಷಪೂತನೆಯ ಲೋಭದಾ ಸ್ತನವೀರಿ
ಜಯಜಯತುಜಯವೆಂದು ಶ್ರೀಕೃಷ್ಣ ನಲಿಯೊ (೧)

ಎನ್ನ ಮೈಯೊಳು ಕೆನೆವ ಮತ್ಸರದ ಕೌರವನ
ಮದದ ತೊಡೆಮುರಿದು ಧರ್ಮಜಯ ಬರೆಯೊ
ಎನ್ನ ಮೈಗುಡಿಯೊಂಬೊ ಪಂಚಭೂತಾಬ್ಧಿಯೊಳು
ಶ್ರೀನಿವಾಸ ವಿಠಲನೆ ನೆಲೆಸೆನ್ನ ಹರಸೊ (೨)

ಮುದ್ದುವಾಮನನಾಗಿ ಮತ್ತೆ ಅವತರಿಸೊ
ಎನ್ನಹಂ ನೆತ್ತಿಯೊಳು ಶ್ರೀಪಾದವಿರಿಸೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೫.೨೦೧೧

No comments:

Post a Comment