Wednesday, March 30, 2011

Shri Krishnana Nooraru Geethegalu - 025

ಕಾಯಬೇಕೊ ಎನ್ನ

ಕಾಯಬೇಕೊ ಎನ್ನ ಜಗದೀ ಸಜ್ಜನರನ್ನ
ಕಾಯ್ದಂತೆ ನೂರ್ಕಾಲ ನೀ ಗೋಕುಲವನ್ನ

ವಿಷಕನ್ಯೆಯ ವಧಿಸಿ ಶಕಟನ ಸಂಹರಿಸಿ
ಧೇನುಕಾಸುರನ ಅಗ್ರಜನಿಂ ಕೊಲಿಸಿ
ಬಕ-ವ್ಯೋಮಾಸುರರ ಯುಕ್ತಿಯೊಳು ನಿಗ್ರಹಿಸಿ
ಕಂದ ಕೃಷ್ಣಯ್ಯನಾಗಿ ಧರೆಯನ್ನುದ್ಧರಿಸಿ (೧)

ಬೃಹ್ಮನಹಂ ಅಳಿಸಿ ಗೋಗ್ರಹಣವ ಬಿಡಿಸಿ
ಇಂದ್ರಗರ್ವವನಿಳಿಸಿ ಗೋವಿಂದನೆನಿಸಿ
ಕಾಳಿಂಗನೊಡ ಸೆಣಸಿ ಕ್ಷಮಿಸಿದಂದದಿ ಮಣಿಸಿ
ಶ್ರೀನಿವಾಸ ವಿಠಲನೆ ಮಂಗಳ ಹರಸಿ (೨)

ಕಾಯಬೇಕೊ ಎನ್ನ ಜಗದೀ ಸಜ್ಜನರನ್ನ
ಕಾಯ್ದಂತೆ ನೂರ್ಕಾಲ ನೀ ಗೋಕುಲವನ್ನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೫.೨೦೧೦

No comments:

Post a Comment