Wednesday, March 30, 2011

Shri Krishnana Nooraru Geethegalu - 057

ಜಯತು ಜಾನಕಿ ರಮಣ

ಜಯತು ಜಯಜಯ ಜಯತು ಜಯಜಯ ಜಯತು ಜಾನಕಿ ರಮಣನೆ
ಸಲಹೊ ನೀನೇ ಗತಿಯೆಮಗೆನಲು ಬಿಡದೆ ಕಾವನೆ ಕರುಣನೆ

ರಘುವಂಶಜ ರಾಮಚಂದಿರ ದಶರಥಾಗ್ರಕುವರನೆ
ಲಕ್ಷ್ಮಣಾಗ್ರಜ ಸೀತಾಹೃದಯನೆ ಶಿವಧನುವನು ಗೆಲಿದನೆ
ತಾಟಕಾಸುರ ಗರ್ವ ಮುರಿದನೆ ರಾವಣನ ಶಿರ ತರಿದನೆ
ಹನುಮರಾಯರ ಬಕುತಿಗೊಲಿದನೆ ತನ್ನೊಳಾಶ್ರಯವಿತ್ತನೆ (೧)

ತ್ರೇತಾರಾಮನೆ ದ್ವಾಪರಶ್ಯಾಮನೆ ಭೀಮ-ಮಧ್ವರ ದೇವನೆ
ವ್ಯಾಸವಾದಿ ಗುರುರಾಯರೂಪನೆ ಮಂತ್ರಾಲಯ ನಿವಾಸನೆ
ಏಳೇಳು ಜನುಮದ ಜಂಜಡ ಜಾಡಿಸಿ ಸುಖದೊಳೆಮ್ಮ ಕಾವನೆ
ಅಮ್ಮ ಲಕುಮಿಯ ಸರಸಾಂಗ ರಂಗನೆ ಶ್ರೀನಿವಾಸ ವಿಠಲನೆ

ಜಯತು ಜಯಜಯ ಜಯತು ಜಯಜಯ ಜಯತು ಜಾನಕಿ ರಮಣನೆ
ಸಲಹೊ ನೀನೇ ಗತಿಯೆಮಗೆನಲು ಬಿಡದೆ ಕಾವನೆ ಕರುಣನೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೨.೨೦೧೧

No comments:

Post a Comment