Wednesday, March 30, 2011

Shri Krishnana Nooraru Geethegalu - 046

ಆರು ಕಾಯುವರೆನ್ನ

ಆರೊ ಕಾಯುವರೆನ್ನ ನಿನಗಿಂತ ಮಿಗಿಲಾಗಿ
ಆದಿಶೇಷಶಯನ ದೊರೆಯೆ ಶ್ರೀಹರಿಯೇ

ಅಣುರೇಣು ತೃಣಮೂಲ ಮುಕ್ಕೋಟಿ ಜೀವರಿಗೆ
ಹನಿ-ಅನ್ನಾಮೃತ ರೂಪದಿಂದೊದಗುವನೆ
ಭಕ್ತಿಯಿಂ ಹರಿಯೆನಲು ಮದ-ಮೋಹ ಕಸಕಳೆದು
ಮುದದೊಳನವರತ ಮನದಿ ಮೂಡುವನೆ (೧)

ಸೆರೆಯೊಳುದ್ಭವಿಸಿದೆ ಕಂಸಾಂಧನ ತೊಡೆದೆ
ಗೋಕುಲದೊಳಖಿಲವನು ಬೆಳಗಿದವನೆ
ಸಲಹೆನ್ನ ಶ್ರೀನಿವಾಸ ವಿಠಲನೆ ಅಭಯದೊಳು
ಅವತರಿಸಿ ದಶದೊಳಗೆ ಮೊಳಗಿದವನೆ (೨)

ಆರೊ ಕಾಯುವರೆನ್ನ ನಿನಗಿಂತ ಮಿಗಿಲಾಗಿ
ಆದಿಶೇಷಶಯನ ದೊರೆಯೆ ಶ್ರೀಹರಿಯೇ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೧೨.೨೦೧೦

No comments:

Post a Comment