Wednesday, March 30, 2011

Shri Krishnana Nooraru Geethegalu - 032

ತುಂಗಾತೀರದೊಡೆಯ

ಜೀಯ ಮಹನೀಯ ರಾಯರಾಯರ ರಾಯ
ಮುಖ್ಯಪ್ರಾಣರೊಲಿದ ತುಂಗಾತೀರದೊಡೆಯ

ಶ್ರೀಗುರು ಸಂಪನ್ನ ಸುಗುಣೇಂದ್ರ ಸುಮತೀಂದ್ರ
ಮಂತ್ರಾಲಯ ದೊರೆಯೆ ಯತಿವರ ರಾಘವೇಂದ್ರ
ಶ್ರೀಹರಿ ಪಾದಪದ್ಮ ಪ್ರಹ್ಲಾದ ಪ್ರತಿರೂಪ
ಮಧ್ವಮತವರ್ಧನ ದ್ವೈತಶ್ರೀ ಪುಣ್ಯದೀಪ (೧)

ಭುವನಗಿರಿ ಭಾಗ್ಯನಿಧಿ ಕ್ಷಮಾಸುರೇಂದ್ರ
ವೆಂಕಟನಾಥನೆ ಮಹಾಮಹಿಮ ವಿಜಯೇಂದ್ರ
ಶ್ರೀನಿವಾಸ ವಿಠಲನ ಮಾನಸ ಯೋಗೇಂದ್ರ
ಕರುಣಿಸಿ ಕಾಯೆಮ್ಮ ಶ್ರೀಗುರುರಾಘವೇಂದ್ರ (೨)

ಜೀಯ ಮಹನೀಯ ರಾಯರಾಯರ ರಾಯ
ಮುಖ್ಯಪ್ರಾಣರೊಲಿದ ತುಂಗಾತೀರದೊಡೆಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೦೭.೨೦೧೦

No comments:

Post a Comment