Wednesday, March 30, 2011

Shri Krishnana Nooraru Geethegalu - 033

ಮೇಘಶ್ಯಾಮ

ಮೇಘಶ್ಯಾಮ ಮೇಘಶ್ಯಾಮ ಕೊಳಲನೂದಿದ
ನಾದದಲೆಯಲೆ ಪ್ರೇಮಸ್ವರವ ಎದೆಗೆ ತುಂಬಿದ

ಚೆಲುವಾಯಿತೊ ನಂದನ ಗೋಕುಲದ ಕಣಕಣ
ಕೇಳಿ ಮುರಳಿ ಗಾಯನ ಪುಳಕಿತ ಬೃಂದಾವನ
ಮೊಗ್ಗರಳಿ ಮಾಲೆಯಾಗಿ ದಳದಳದೊಳು ಮೋಹನ (೧)

ಜಡವಾಗಿವೆ ಮೈಮನ ನುಡಿಸೊ ವೀಣೆ ಪ್ರೇರಣ
ಜಗವ ನಡೆಸೊ ಪಾವನ ಪ್ರೀತಿಪ್ರೇಮ ಕಾರಣ
ಶ್ರೀನಿವಾಸ ವಿಠಲನಾಗಿ ಕಾಯಬೇಕೊ ಅನುದಿನ (೨)

ಮೇಘಶ್ಯಾಮ ಮೇಘಶ್ಯಾಮ ಕೊಳಲನೂದಿದ
ನಾದದಲೆಯಲೆ ಪ್ರೇಮಸ್ವರವ ಎದೆಗೆ ತುಂಬಿದ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೮.೨೦೧೦

No comments:

Post a Comment