Wednesday, March 30, 2011

Shri Krishnana Nooraru Geethegalu - 038

ಕಂಡುಹೋಗುವ ಚೆಲುವನ

ಇಲ್ಲೇ ಎಲ್ಲೋ ಸನಿಹದಲ್ಲಿ ಯಮುನೆ ಜುಳುಜುಳು ಹರಿದಿದೆ
ಮಾತೆ ಮೊಲೆಯೊಳು ಮುದ್ದುಕರುವು ಮಮತೆಸುಧೆಯ ಸವಿದಿದೆ

ಬೃಂದಾವನದೆದೆ ನಂದಾದೀಪವು ಗೋಕುಲವನೇ ಬೆಳಗಿದೆ
ಖಾಲಿ ತೂಗೋ ಉಯ್ಯಾಲೆಯಲಿ ರಾಧೆ-ಕೃಷ್ಣರ ಒಲವಿದೆ

ಮಿಲನ ಗಳಿಗೆ ಮರೆತ ಮುರಳಿ ರಾಗ ಮೌನವಾಗಿದೆ
ಒಂಟಿ ವೀಣೆ ಭಾವತುಂಬಿ ನುಡಿಸೊ ಬೆರಳ ಹರಸಿದೆ

ಖಾಲಿ ಮೊಸರ ಗಡಿಗೆಯೊಳಗೆ ಚೋರಕೃಷ್ಣನ ನಗುವಿದೆ
ಸರ್ವಗಂಧನ ಮುದ್ದುಬಾಯೊಳು ಮೂಜಗವೆ ಅಡಗಿದೆ

ಬಾರೆ ಗೆಳತಿ ಕಂಡುಹೋಗುವ ಒಂದುಕ್ಷಣವಾ ಚೆಲುವನ
ಗೋಪಗೊಲ್ಲನ ರಾಧೆನಲ್ಲನ ಶ್ರೀನಿವಾಸ ವಿಠಲ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೨.೧೦.೨೦೧೦

No comments:

Post a Comment