Wednesday, March 30, 2011

Shri Krishnana Nooraru Geethegalu - 027

ಪದ ಹಾಡೋ

ಪದ ಹಾಡೋ ಹರಿಯ ಪದ ಹಾಡೋ
ವಸುದೇವಕಂದನ ಪರವಾಸುದೇವನ
ಪುರಂದರನೊಡೆಯನೆಮ್ಮ ಶ್ರೀನಿವಾಸ ವಿಠಲನ

ನಾನು ನಾನಲ್ಲವೆಂಬ ಪದ ಹಾಡೋ
ಜಗದೊಡೆಯ ನೀನೆಂಬ ಪದ ಹಾಡೋ
ನಿನ್ನೊಳು ನಾನೆಂಬ ನಿಯಮವೆ ಸರಿಯೆಂಬ
ಶ್ರೀನಾಮ ಪಾಡುವುದೆ ಮುಕ್ತಿಯ ಗುರಿಯೆಂಬ (೧)

ನಾನು ನಶ್ವರನೆಂಬ ಪದ ಹಾಡೋ
ನೀನೇ ಈಶ್ವರನೆಂಬ ಪದ ಹಾಡೋ
ಪಾಮರನ ಪೊರೆವ ಪರಮಾತ್ಮ ನೀನೆಂಬ
ನಂಬಿನೆಚ್ಚಿಹರ ಕಾವ ಗೋವಿಂದನೆಂಬ (೨)

ಪದ ಹಾಡೋ ಹರಿಯ ಪದ ಹಾಡೋ
ವಸುದೇವಕಂದನ ಪರವಾಸುದೇವನ
ಪುರಂದರನೊಡೆಯನೆಮ್ಮ ಶ್ರೀನಿವಾಸ ವಿಠಲ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೦೬.೨೦೧೦

No comments:

Post a Comment