Wednesday, March 30, 2011

Shri Krishnana Nooraru Geethegalu - 035

ಕಾಯೋ ಹರಿ ಶ್ರೀನಿವಾಸ

ಕಾಯೋ ಹರಿ ಶ್ರೀನಿವಾಸ ಜಗದೀಶ ಶ್ರೀಶ
ಜತನದಿಂ ಮೂಜಗವ ಕಾಯೋ ಆದಿಶೇಷ

ಮನೋಹರ ವನಮಾಲಿ ಗೋವರ್ಧನ ವಿಹಾರಿ
ಮಾಧವ ಮಧುಸೂದನ ಬೃಂದಾವನ ಸಂಚಾರಿ
ಕೇಶವ ಕಾಳಿಂಗಮರ್ದನ ವಿಶ್ವರೂಪಿ ಅವತಾರಿ
ಮಧುರೇಶ ದ್ವಾರಕೇಶ ನರಸಿಂಹ ಕೇಸರಿ (೧)

ಲೀಲಾಧರ ಲೋಹಿತಾಕ್ಷ ಲೋಕನಾಥ ಶ್ರೀಹರಿ
ಪದ್ಮೇಶ ಪರಮೇಶ ಪುರುಷೋತ್ತಮ ಮುರಾರಿ
ಬಾಲಕೃಷ್ಣ ಗೋವಿಂದ ಗೋಕುಲೇಶ ಶೌರಿ
ಶ್ರೀನಿವಾಸ ವಿಠಲನೆ ಗೋಪಾಲ ನರಹರಿ (೨)

ಕಾಯೋ ಹರಿ ಶ್ರೀನಿವಾಸ ಜಗದೀಶ ಶ್ರೀಶ
ಜತನದಿಂ ಮೂಜಗವ ಕಾಯೋ ಆದಿಶೇಷ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೯.೨೦೧೦

No comments:

Post a Comment