Wednesday, March 30, 2011

Shri Krishnana Nooraru Geethegalu - 034

ಹೇರಂಬ ಗಣಪ

ಕೊಡು ಮತಿಯ ಪಾಮರಗೆ ಮೋದಕನೆ
ಕರುಣಿಸೊ ಕರಮುಗಿವೆ ಹೇರಂಬ ಗಣಪನೆ

ಗೌರಿಯ ದಿವ್ಯದೇಹದ್ರವ್ಯದಿಂದುದಯಿಸಿ
ಮಾತೆನುಡಿಯ ಪಾಲಿಸೆ ಶಂಕರನ ಕೆರಳಿಸಿ
ನಿಜರೂಪ ಕಳಕೊಂಡ ಗಜರೂಪ ಪಡಕೊಂಡ
ಮುಕ್ಕೋಟಿ ದೇವರೊಳು ಮೊದಲು ಪೂಜಿಪನೆ (೧)

ಏಕದಂತ ಬುದ್ಧಿವಂತ ಭುವನಪತಿ ಬಾಲಚಂದ್ರ
ಉದ್ಧಂಡ ವಕ್ರತುಂಡ ವರಪ್ರದ ಅವನೀಂದ್ರ
ಶ್ರೀನಿವಾಸ ವಿಠಲನೆ ಆದಿಯೊಳು ವಂದಿಸುವ
ಓಂಕಾರ ಪ್ರಮೋದ ಸುಮುಖನೆ ಮಹಾದೇವ (೨)

ಕೊಡು ಮತಿಯ ಪಾಮರಗೆ ಮೋದಕನೆ
ಕರುಣಿಸೊ ಕರಮುಗಿವೆ ಹೇರಂಬ ಗಣಪನೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೯.೨೦೧೦

No comments:

Post a Comment