Wednesday, March 30, 2011

Shri Krishnana Nooraru Geethegalu - 026

ಯಾಕೋ ರಂಗಯ್ಯ

ಯಾಕೋ ರಂಗಯ್ಯ ಅದ್ಯಾಕೋ ನನ್ನಯ್ಯ
ಚೋರನೆನುವರೊ ನಿನ್ನ ಮುದ್ದುಕೃಷ್ಣಯ್ಯ

ಎಮ್ಮ ಮನೆಯೊಳು ಕರೆವ ಗೋವಿಲ್ಲವೆ ಕೃಷ್ಣ
ಚಿತ್ರದ ಗಡಿಗೆಯೊಳು ನೊರೆಯ ಹಾಲಿಲ್ಲವೆ
ಸಿಹಿಸಿಹಿ ಕೆನೆಯಾದ ಮೊಸರಿಲ್ಲವೆ ಕೃಷ್ಣ
ಗರಿಗರಿ ರುಚಿಯಾದ ನವನೀತವಿಲ್ಲವೆ (೧)

ಅರಿಯಳು ಯಶೋದೆ ಅವತಾರಿ ಇವನೆಂದು
ನವನೀತಚೋರ ಕೃಷ್ಣ ಮನೆಗೆ ಮಂಗಳನೆ೦ದು
ದೂರುವ ಜನರೆದೆಯೊಳು ನೆಲೆಯಾದ ಹರಿಯೆಂದು
ಸಕಲರ ಭವಬಂಧು ಶ್ರೀನಿವಾಸ ವಿಠಲನೆಂದು (೨)

ಯಾಕೋ ರಂಗಯ್ಯ ಅದ್ಯಾಕೋ ನನ್ನಯ್ಯ
ಚೋರನೆನುವರೊ ನಿನ್ನ ಮುದ್ದುಕೃಷ್ಣಯ್ಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೬.೨೦೧೦

No comments:

Post a Comment