Wednesday, March 30, 2011

Shri Krishnana Nooraru Geethegalu - 050

ಮನುಜನ ಮಾಡೆನ್ನ

ಮನುಜನ ಮಾಡೆನ್ನ ಹರಿಯೇ ಮುಕುತಿಯ ಕೊಡೋ ಮುನ್ನ ಶ್ರೀಹರಿಯೇ
ಜ್ಯೋತಿಯದು ತಾನುರಿದು ಬೆಳಗುವಂದದಿ ಜಗವ
ಕರುಣಿಸೊ ಮತಿಯನು ನಿನ್ನ ನಾಮ ಪೊಗಳುವ

ವಾಮನ ನೀನಾಗಿ ಬಲಿ ನೆತ್ತಿಯ ತುಳಿದಂತೆ
ಮಾವ ಕಂಸಾದಿ ಕೂಳರನು ಕೊಂದಂತೆ
ನಯದೊಳು ಕುರುಜನ ದುರಿತವ ಮುರಿದಂತೆ
ಎನ್ನೊಳಗಾರರ ಕೇಡನು ತೊಳೆದು (೧)

ಏಳುಬೆಟ್ಟದ ದೊರೆಯೇ ಎನ್ನೈಸಿರಿಯೇ
ಅಪ್ಪಪ್ಪನಪ್ಪನ ಕಾಯ್ದ ತಿಮ್ಮಪ್ಪನೆ
ರಂಗಪಟ್ಟಣವಾಸ ಶ್ರೀನಿವಾಸ ವಿಠಲನೆ
ಎನ್ನೊಳಡಗಿಹ ಮಂಗನಾಟವ ಕಳೆದು (೨)

ಮನುಜನ ಮಾಡೆನ್ನ ಹರಿಯೇ ಮುಕುತಿಯ ಕೊಡೋ ಮುನ್ನ ಶ್ರೀಹರಿಯೇ
ಜ್ಯೋತಿಯದು ತಾನುರಿದು ಬೆಳಗುವಂದದಿ ಜಗವ
ಕರುಣಿಸೊ ಮತಿಯನು ನಿನ್ನ ನಾಮ ಪೊಗಳುವ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೦೧.೨೦೧೧

No comments:

Post a Comment