Wednesday, March 30, 2011

Shri Krishnana Nooraru Geethegalu - 039

ಇದು ಕಲಿಯುಗವೊ

ಇದು ಕಲಿಯುಗವೊ ಕಲಹದಾ ಜಗವೊ
ಶ್ರೀಹರಿ ದಯೆಯಿರಿಸೊ ಇದ ಸರಿ ನಡೆಸೊ

ಆರು ತಮಂಗಳ ಆಚರಿಸೊ ಕೌರವರೊ
ಪರಸತಿ-ಸ್ವತ್ತಿಗೆ ದಾಹಾಕ್ಷಿ ರಾವಣರೊ
ನಾರಾಯಣನೆನದ ಪ್ರಹ್ಲಾದನ ಪಿತರೊ
ಅತಿಘೋರ ನರಕಕೆ ನಡೆದಿಹ ಜನರಿವರೊ (೧)

ಅಂಧಕಾರವನಳಿಸೊ ಹಣತೆಯ ಬೆಳಗಿಸೊ
ಸುಶೀಲ-ಸುಮತಿಗಳ ತೈಲವ ತುಂಬಿಸೊ
ನೀತಿನೇಮ ನಿಯಮವೆಂಬೊ ಹರಳೆಯನು ಹೊಸೆದಿಟ್ಟು
ಶ್ರೀನಿವಾಸ ವಿಠಲನೆ ನೀನೀ ಜಗವ ರಕ್ಷಿಸೊ (೨)

ಇದು ಕಲಿಯುಗವೊ ಕಲಹದಾ ಜಗವೊ
ಶ್ರೀಹರಿ ದಯೆಯಿರಿಸೊ ಇದ ಸರಿ ನಡೆಸೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೧೦.೨೦೧೦

No comments:

Post a Comment