Wednesday, March 30, 2011

Shri Krishnana Nooraru Geethegalu - 060

ಶ್ರೀ ಮಂಜುನಾಥ

ಕಾಣಬಂದೆನೊ ದೇವ ನಿನ್ನ ಸಿರಿ ವೈಭವವ
ಧರ್ಮವೇ ಧರೆಗಿಳಿದು ಧನ್ಯವಾದೀ ಸೋಜಿಗವ
ಶುಭನೇತ್ರೆಯ ತಟದಿ ನೆಲೆಯಾದ ಶಂಕರನೆ
ಧರ್ಮಸ್ಥಳದ ದೊರೆಯೆ ಶ್ರೀಮಂಜುನಾಥ

ನೋವಿಗೆ ಬಲವಾಗಿ ಇಲ್ಲವಗೆ ಎಲ್ಲವಾಗಿ
ದುರುಳರನು ಸದೆಬಡಿವ ಅಣ್ಣಪ್ಪನರಸನೆ
ನಿತ್ಯಾನ್ನದಕ್ಷಯನೊ ನೀ ಮೂಜಗದ ಹಸಿವಿಗೆ
ಅನ್ನಪೂರ್ಣೆಯ ದೇವ ಕಣ್ಣಪ್ಪಗೊಲಿದನೆ (೧)

ಸಾಸಿರದ ಶರಣಯ್ಯ ಸಿರಿಗೌರಿ ಪತಿರಾಯ
ಕರುಣಿಸೊ ಮಂಗಳನೆ ಮುಕ್ಕಣ್ಣ ಶಿವರಾಯ
ರಕ್ಷೆಯಾಗಲಿ ಮಗನು ಕುಕ್ಕೆಯ ಸುಬ್ಬರಾಯ
ಹರಸಿ ನಿನ್ನಯ ಸಖನು ಶ್ರೀನಿವಾಸ ವಿಠಲಯ್ಯ (೨)

ಕಾಣಬಂದೆನೊ ದೇವ ನಿನ್ನ ಸಿರಿ ವೈಭವವ
ಧರ್ಮವೇ ಧರೆಗಿಳಿದು ಧನ್ಯವಾದೀ ಸೋಜಿಗವ
ಶುಭನೇತ್ರೆಯ ತಟದಿ ನೆಲೆಯಾದ ಶಂಕರನೆ
ಧರ್ಮಸ್ಥಳದ ದೊರೆಯೆ ಶ್ರೀಮಂಜುನಾಥ

(ದಿನಾಂಕ ೦೨.೦೩.೨೦೧೧ರಂದು ಶಿವರಾತ್ರಿಯ ಶುಭರಾತ್ರಿಯಂದು, ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ರಚಿಸಿದ ಕೃತಿ)

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೦೩.೨೦೧೧

No comments:

Post a Comment