Wednesday, March 30, 2011

Shri Krishnana Nooraru Geethegalu - 063

ಉಗಾಭೋಗ - ೦೩

ತ್ರೇತೆಯೊಳು ರಾವಣನ ದಶಶಿರವ ತರಿದಂತೆ
ಎನ್ನೊಳಡಗಿಹ ದುರಾಸೆಯದ ಬಿಡಿಸೊ
ನಿನ್ನ ಕಾಣುವಾಸೆಯೊಂದನು ಉಳಿಸೊ

ದ್ವಾಪರದೆ ಕೌರವನ ಕೆನೆವತೊಡೆ ಮುರಿದಂತೆ
ಎನ್ನೊಳಡಗಿಹ ಕಾಮಕ್ರೋಧಾಗ್ನಿಯದ ದಹಿಸೊ
ನಿನ್ನ ಕೂಡುವ ಕಾಮನೆಯೊಂದನು ಉಳಿಸೊ

ಎನ್ನೊಳಡಗಿಹ ಮೋಹಮದಮತ್ಸರವ ಮರೆಸೊ
ಎನ್ನೊಡೆಯ ಶ್ರೀನಿವಾಸ ವಿಠಲನೆ ಆರರ ಕಸಕಳೆದು
ನಿನ್ನ ಶ್ರೀಪದದೊಳು ಮೂರಕ್ಷರದ ಮುಕುತಿಯನು ಕರುಣಿಸೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೦೩.೨೦೧೧

No comments:

Post a Comment