Wednesday, March 30, 2011

Shri Krishnana Nooraru Geethegalu - 028

ಗೋಕುಲ ನಿರ್ಗಮನ

ಗೋಕುಲ ನಿರ್ಗಮನ ಗೋವಿಂದನ ಗೋಕುಲ ನಿರ್ಗಮನ
ಮನ್ನಿಸಿ ಮಹಾಮಂತ್ರಿ ಅಕ್ರೂರನಾಹ್ವಾನ
ಮಾವನ ಮಥುರೆಗೆ ಶ್ರೀಕೃಷ್ಣನಾಗಮನ

ಬಂದ ಬಂದನೊ ಬಂದ ಬೃಂದಾವನಕ೦ದ
ಭವರೋಗಶಮನ ಶ್ರೀಮುಕುಂದ ಬಂದ
ಅಂಧನ ಕೊಲಬಂದ ಬಂಧನ ಕಳೆಬಂದ
ಕಂಸಕತ್ತಲನ್ನಳಿಸಿ ಧರ್ಮವುಳಿಸೆ ಬಂದ (೧)

ಮುಷ್ಟಿಕಹರ ಬಂದ ಚಾಣೂರನ ಕೊಂದ
ಮದಿಸಿದ ಗಜಗರ್ವ ಮುರಿದು ಬಂದ
ಮಾವನ ಮಡಿಯೆಂದ ಅಗ್ನಿಗಾಯುಧ ಸಂದ
ಶ್ರೀನಿವಾಸ ವಿಠಲನೆಮ್ಮ ದೇವಕಿಕಂದ

ಗೋಕುಲ ನಿರ್ಗಮನ ಗೋವಿಂದನ ಗೋಕುಲ ನಿರ್ಗಮನ
ಮನ್ನಿಸಿ ಮಹಾಮಂತ್ರಿ ಅಕ್ರೂರನಾಹ್ವಾನ
ಮಾವನ ಮಥುರೆಗೆ ಶ್ರೀಕೃಷ್ಣನಾಗಮನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೬.೨೦೧೦

No comments:

Post a Comment